ಮಂಗಳವಾರ, ನವೆಂಬರ್ 3, 2009

೧೬]ನವಂಬರ್ ೧ ಕನ್ನಡ ರಾಜ್ಯೋತ್ಸವ -ಭಾಗ-೩.

[ಕನ್ನಡ ರಾಜ್ಯೋತ್ಸವ -ಭಾಗ ೨ ರ ಮುಂದವರೆದ ಭಾಗ]
ಶ್ರೀ ವಿರೋಧಿನಾಮ ಸಂವತ್ಸರ ದಕ್ಷಿಣಾಯಣ ಶರದೃತು ಕಾರ್ತಿಕ ಮಾಸ ಕೃಷ್ಣ ಪಕ್ಷ ,ಪಾಡ್ಯ -ತಾ.೦೩-೧೧-೨೦೦೯ .
ಕನ್ನಡ ನಾಡಿನ ಏಳ್ಗೆಗಾಗಿ ಸಾಹಿತ್ಯ ಕ್ಷೇತ್ರವಲ್ಲದೆ ಇನ್ನು ಅನೇಕ ಕ್ಷೇತ್ರಗಳಲ್ಲಿ ,ಅನೆಕ ಮಹನಿಯರುಗಳು ದುಡಿದಿದ್ದಾರೆ.ಅದು,ವೈಜ್ಞಾನಿಕ ಕ್ಷೇತ್ರವಿರಬಹುದು,ವಿದ್ಯಾ ಕ್ಷೇತ್ರವಿರಬಹುದು,ವ್ಯವಸಾಯ ಕ್ಷೇತ್ರವಿರಬಹುದು,ಸಂಗೀತ ಕ್ಷೇತ್ರವಿರಬಹುದು,ಸಿನಿಮಾ ಕ್ಸೆತ್ರವಿರಬಹುದು ,ಸೇವಾ ಕ್ಷೇತ್ರವಿರಬಹುದು,ಕ್ರೀಡಾ ಕ್ಷೇತ್ರವಿರಬಹುದು,ಇಂಜಿನೀರಿಂಗ್ ಕ್ಷೇತ್ರವಿರಬಹುದು,ಔದ್ಯೋಗಿಕ ಕ್ಷೇತ್ರವಿರಬಹುದು,ಹೀಗೆ ನಾಡಿಗಾಗಿ ಹೋರಾಡಿದವರು ,ನುಡಿಗಾಗಿ ಹೋರಾಡಿದವರು ,ಕನ್ನಡ ಸಂಸ್ಕೃತಿಯ ಉಳುವಿಗಾಗಿಹೋರಾಡಿದವರು,ಕಲೆಯ ಏಳ್ಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟವರು,ರಾಜಕೀಯ,ಆರ್ಥಿಕ,ಸಾಮಾಜಿಕ, ಸಮಾನತೆ, ನೈತಿಕತೆ,ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಅನೇಕ ಮಹನೀಯರುಗಳು ಕನ್ನಡ ಭಾಷೆಯ,ನಾಡು ನುಡಿಯ ಬಗ್ಗೆ ದುಡಿದು ತಮ್ಮದೇ ಛಾಪು ಮೂಡಿಸಿದ್ದಾರೆ .ಹಲವರನ್ನಾದರು ನೆನೆಯುವುದು ಇಂದಿನ ಕರ್ತವ್ಯವಾದೀತು.
ಸರ್.ಎಂ.ವಿಶ್ವೇಶ್ವರಯ್ಯ ನವರು ಆಧುನಿಕ ಮೈಸೂರಿನ ನಿರ್ಮಾಪಕ ರೆನಿಸಿಕೊಂಡವರು. ಪ್ರಖ್ಯಾತ ಇಂಜಿನೀಯರ್ ,ಹಾಗು ದಕ್ಷ ಆಡಳಿತಗಾರರಾಗಿದ್ದರು .ಅವರು ಇಂಜಿನೀಯರ್ ಆಗಿ ನಿರ್ವಹಿಸಿದ ಅನೇಕ ಕಾರ್ಯ ಯೋಜನೆಗಳು ಅದ್ಭುತವೆನಿಸಿದವು. ಕೃಷ್ಣರಾಜ ಸಾಗರ ಅಣೆಕಟ್ಟು ,ವಾಣಿವಿಲಾಸ ಸಾಗರ ,ಶರಾವತಿ ವಿದ್ಯುತ್ ಯೋಜನೆ ,ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ,ಹೀಗೆ ಒಂದೇ ,ಎರಡೇ,ಎಲ್ಲಾ ವಿಶಿಷ್ಟ ಯೋಜನೆಗಳೇ.
ವೈಜ್ಞಾನಿಕ ಕ್ಷೇತ್ರ ದಲ್ಲಿ ಡಾ.ಯು.ಅರ್ .ರಾವ್,ಅವರನ್ನು ಮರೆಯುವುದು ಉಂಟೆ? ಇವರು ಆಂತರ ರಾಷ್ಟ್ರೀಯ ಖ್ಯಾತೀಯ ಬಾಹ್ಯಾಕಾಶ ವಿಜ್ಞಾನಿ."ಆರ್ಯಭಟ"ಉಡಾವಣೆಯ ನೇತೃತ್ವ ವಹಿಸಿದ್ದವರು.
ಕನ್ನಡ ಸಿನಿಮಾ ಪ್ರಪಂಚ ಅನೇಕ ಅದ್ಭುತಗಳನ್ನು ಸಾಧಿಸಿದೆ. 'ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ 'ಪ್ರಶಸ್ತಿ ವಿಜೇತ ನಮ್ಮ ಕೆಂಟುಕಿ ಕರ್ನಲ್,ಡಾ.ರಾಜಕುಮಾರ್ ಕನ್ನಡಿಗರ ಹ್ರುನ್ಮನಗಳಲ್ಲಿ ನೆಲೆಸಿರುವ ಮೇರು ನಟರು. ಕನ್ನಡ ಚಿತ್ರರಂಗ ವೆಂದರೆ ನಮ್ಮ ರಾಜಕುಮಾರ ಎನ್ನುವಂತೆ ಮನೆ ಮಾತಾಗಿದ್ದವರು.
ಕುಮಾರ ತ್ರಯರಲ್ಲಿ ಇನ್ನಿಬ್ಬರು,ಕಲ್ಯಾಣ್ ಕುಮಾರ್,ಹಾಗು ಉದಯಕುಮಾರ.ಇವರುಗಳೂ ಸಹ ಅಂದಿನ ಕಾಲಕ್ಕೆ ಮೇರು ನಟರುಗಳೇ. ಡಾ.ವಿಷ್ಣುವರ್ಧನ್ ,ಅಂಬರೀಶ್,ಅನಂತನಾಗ್, ಶಂಕರನಾಗ್,ಕ.ಎಸ್.ಆಶ್ವಥ್. ಆರ್.ಏನ್ .ನಾಗೇಂದ್ರ ರಾಯರು, ನರಸಿಂಹ ರಾಜು, ಬಾಲಕೃಷ್ಣ,,ದಿನೇಶ್,ದ್ವಾರಕೀಶ್, ರಾಜೇಶ್ ,ಗಂಗಾಧರ್,ಶ್ರೀನಿವಾಸಮೂರ್ತಿ ,ತೂಗುದೀಪ ಶ್ರೀನಿವಾಸ್ ,ಸುಂದರ ಕೃಷ್ಣ ಅರಸ್, ಶಕ್ತಿ ಪ್ರಸಾದ್ ,ಹೀಗೆ ನಟರುಗಳ ದೊಡ್ಡ ಸಾಲು.
ಇನ್ನು ಮಹಿಳಾ ಅಭಿನೆತ್ರೆ ಯರಲ್ಲಿ ಪಂಡರಿಬಾಯಿ,ಹರಿಣಿ ,ಲೀಲಾವತಿ, ಬಿ.ಸರೋಜಾದೇವಿ,ಸಾಹುಕಾರ್ ಜಾನಕೀ,ಉದಯಚಂದ್ರಿಕ , ಕಲ್ಪನಾ,,ಜಮುನ , ಜಯಂತಿ,ಭಾರತಿ,ಆರತಿ,ಲಕ್ಷ್ಮಿ, ಭವ್ಯ, ಮುಂತಾದ ವರು ಕನ್ನಡ ಚಿತ್ರರಂಗದಲ್ಲಿ ಪ್ರಮುಖರೆನಿಸಿದವರು.
ಇಲ್ಲಿ ಎಲ್ಲಾ ರಂಗಗಳಲ್ಲಿ ಸೇವೆ ಸಲ್ಲಿಸಿದವರನ್ನು ನೆನೆಸಿಕೊಳ್ಳುವುದು ಕರ್ತವ್ಯವಾದರೂ ಅದು ಕಷ್ಟ ಸಾಧ್ಯ.ಆದರಿಂದ ಯಾರು ತಪ್ಪು ತಿಳಿದು ಕೊಳ್ಳು ವಂತಿಲ್ಲ.
ಮತ್ತೊಮ್ಮೆ ಕನ್ನಡ ರಾಜ್ಯೋತ್ಸವ ಬಂದಿದೆ .ನವಂಬರ್ ತಿಂಗಳು ಪೂರ್ತ ಕನ್ನಡ ರಾಜ್ಯೋತ್ಸವ.ನವಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡದ ಬಗ್ಗೆ ಚಿಂತನೆ,ಜಿಜ್ಞಾಸೆ, ಮರು ಹುಟ್ಟು ಪಡೆಯುತ್ತದೆ.ಅಂದರೆ ಆ ತಿಂಗಳಿನಲ್ಲಿ ಮಾತ್ರ ಕನ್ನಡದ ಬಗ್ಗೆ ಚಿಂತನ-ಮಂಥನ ನಡೆಯಬೇಕೆ? ಉಳಿದ ಹನ್ನೊಂದು ತಿಂಗಳೂ ಕನ್ನಡದ ಬಗ್ಗೆ ಅಸಡ್ಡೆ ಯಾಕೆ? ಕನ್ನಡ ಭಾಷೆ ಕನ್ನಡ ರಾಜ್ಯದಲ್ಲಿಯೇ ಮೂಲೆಗುಂಪಾಗಿ ,ಕನ್ನಡ ಭಾಷಿಕರು ಮುಲೆಗುಂಪಾಗಬೇಕೆ? ಕರ್ನಾಟಕ ರಾಜ್ಯಕ್ಕೆ ವಲಸೆ ಬಂದಿರುವವರೇ ರಾಜ್ಯದ ಸಾರ್ವಭೌಮ ರಾಗಬೇಕೆ? ಕನ್ನಡಿಗರೇ ಕನ್ನಡ ರಾಜ್ಯದಲ್ಲಿ ಪರಕೀಯರಾಗಬೇಕೆ? ಕನ್ನಡ ,ಕರ್ನಾಟಕ್ ರಾಜ್ಯ ತಬ್ಬಲಿಯಾಗುತ್ತಿವೆಯಾ? ಕಾಲವೇ ಉತ್ತರಿಸಬೇಕಿದೆ..
ಕನ್ನಡ ಭಾಷೆ ,ಸಂಸ್ಕೃತಿ ಯನ್ನು ಉಳಿಸಬೇಕಾದ ಅನಿವಾರ್ಯತೆ ಎಂದಿಗಿಂತ ಇಂದು ಹೆಚ್ಹಾಗಿರುತ್ತದೆ.

ಗಮನಿಸಬೇಕಾದ ಒಂದಂಶವಿದೆ.ಇತ್ತೀಚಿಗೆ ಉತ್ತರ ಕರ್ನಾಟಕದ ಬಹುತೇಕ ಭಾಗಗಳು ಮಳೆಯ ಅಬ್ಬರದಿಂದ ತುಂಬಾ ತೊಂದರೆಗೆ ಸಿಲುಕಿವೆ.ಇದನ್ನು ಮನಗಂಡ ಕನ್ನಡ ಜನತೆ ಈ ಭಾರಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವುದಿಲ್ಲ ಎಂದು ತೀರ್ಮಾನಿಸಿ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ.ಎಲ್ಲೂ ಅದ್ದೂರಿ ಸಮಾರಂಭಗಳು ನಡೆದಿಲ್ಲ.ನಮ್ಮ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗಳನ್ನೂ ಪ್ರಕಟಿಸಿಲ್ಲ. ಅದು ನೆರೆ ಹಾವಳಿಯ ಪರಿಹಾರ ಕಾರ್ಯದತ್ತ ಮನ ಮಾಡಿದೆ.
ಒಂದು ಅತ್ಯಂತ ಸಂತಸದ ಸಮಾಚಾರವೆಂದರೆ ಬಂಗಾರದ ಮನುಷ್ಯನಿಗೆ ಭಾರತದ ಗೌರವಾರ್ಪಣೆ.'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ' ಪುರುಸ್ಕೃತ ಡಾ. ರಾಜಕುಮಾರ್ ಅವರ ಅಂಚೆ ಚೀಟಿ ನವಂಬರ್ ೧ ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ.ರೂ ೫ ರ ಮುಖ ಬೆಲೆಯ ಈ ಅಂಚೆ ಚೀಟಿ ಯನ್ನು ಮುಖ್ಯ ಮಂತ್ರಿ ಯಡಿಯೂರಪ್ಪ ಬಿಡುಗಡೆ ಮಾಡಿದರು .

ಈ ದಿನದ ಸ್ಪಂದನ:
'ವಂದೇ ಮಾತರಂ'ರಚಿಸಿದ ಬಂಕಿಮ ಚಂದ್ರ ಚಟರ್ಜಿ-
'ವಂದೇ ಮಾತರಂ'ಈ ರಾಷ್ಟ್ರಭಕ್ತಿ ಗೀತೆಯನ್ನು ಕೇಳುತ್ತಿದ್ದಂತೆಯೇ ,ಹಾಡುತ್ತಿದ್ದಂತೆಯೇ ನಾವುಗಳೆಲ್ಲಾ ಪುಳಕ ಗೊಳ್ಳುತ್ತೇವೆ ಅಲ್ಲವೇ?ಈ ಗೀತೆಯನ್ನು ರಚಿಸಿದ ಅಪ್ರತಿಮ ದೇಶಭಕ್ತ ಕವಿ ,ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ ಯವರು ,ಬಂಗಾಳಿಗಳು.ಪದವಿ ಪಡೆದ ಬಂಗಾಲದ ಮೊದಲ ಇಬ್ಬರಲ್ಲಿ ಇವರೂ ಒಬ್ಬರು.ಇವರ ಪೂರ್ತಾ ಹೆಸರು ಬಂಕಿಮ ಚಂದ್ರ ಚಟ್ಟೋಪಾಧ್ಯಾಯ .ಇವರು ೨೭,ಜೂನ್ ೧೮೩೮ ರಂದು ಬಂಗಾಲದ ಕತಲಾಪುರ ಎಂಬಲ್ಲಿ ಜನಿಸಿದರು.ಆನಂದಮಠ ಎಂಬ ಕಾದಂಬರಿಯ ಬಗ್ಗೆ ಯಾರಿಗೆ ಗೊತ್ತಿಲ್ಲ ,ಆ ಕೃತಿಯ ಕರ್ತೃ ಇವರೇ .ಸ್ವಾತಂತ್ರ್ಯ ಪೂರ್ವದಲ್ಲಿ 'ವಂದೇ ಮಾತರಂ' ಗೀತೆ ,ಸ್ವಾತಂತ್ರ್ಯ ಹೋರಾಟಗಾರರಲ್ಲಿ ಸ್ಪೂರ್ತಿ ಯನ್ನು ತುಂಬಿತ್ತು.ಒಗ್ಗಟ್ಟನ್ನು ಪ್ರೇರೆಪಿಸುತ್ತಿತ್ತು .ಛಲವನ್ನು ತಂದು ಕೊಟ್ಟಿತ್ತು .ಇಂತಹದೊಂದು ಪರಮ ದೇಶಭಕ್ತಿ ಗೀತೆಯನ್ನು ನಮಗೆ ಕೊಟ್ಟ ಬಂಕಿಮ ರನ್ನು ನಾವು ಅನುದಿನವೂ ನೆನೆಯೋಣ.


ಹೀಗೊಂದು ಕನ್ನಡ ಕವನ:
ಮಾತನಾಡಿ
ಯಾವಾಗಲೂ
ಸುಂದರ ಭಾಷೆ ಕನ್ನಡ.
ಓದಿ ,ಯಾವಾಗಲೂ
ಸರಳ ಭಾಷೆ ಕನ್ನಡ.
ಬೇಡ ನಮಗೆ ,
ಎನ್ನಡ ,ಪನ್ನಡ,
ಮಮ್ಮಿ-ಡ್ಯಾಡಿ ಎನಬೇಡಿ ,
ತರಬೇಡಿ ಕನ್ನಡಕ್ಕೆ
ಅವಗಡ!
[ನನ್ನ "ಬಣ್ಣಗಳು" ಎಂಬ ಕವನ ಸಂಕಲನದಿಂದ]

***************************************ಓಂ********************************************************







ಭಾನುವಾರ, ನವೆಂಬರ್ 1, 2009

೧೫]ನವಂಬರ್-೧ ನಮ್ಮ ಕನ್ನಡ [ಕರ್ನಾಟಕ] ರಾಜ್ಯೋತ್ಸವ . ಭಾಗ-೨ .


ನವಂಬರ್
-೧,ನಮ್ಮ ಕನ್ನಡ ರಾಜ್ಯೋತ್ಸವ [ಮುಂದುವರೆದ ಭಾಗ]
ಬಿ .ಎಂ.ಶ್ರೀ :
ದಿನಾಂಕ ೦೩-೦೧ -೧೮೮೪ ರಲ್ಲಿ ಜನಿಸಿದ ಆಚಾರ್ಯ ಬಿ.ಎಂ.ಶ್ರೀಕಂಠಯ್ಯ [ಇವರು ಬಿ.ಎಂ.ಶ್ರೀ ಎಂದೇ ಪ್ರಸಿದ್ದರು ]ನವರು ಕನ್ನಡದ ಕಣ್ವ ಋಷಿ ಎನಿಸಿಕೊಂಡವರು . 'ಇಂಗ್ಲಿಷ್ ಗೀತೆಗಳು ' ,'ಗದಾಯುದ್ದ ನಾಟಕಂ ', 'ಕನ್ನಡ ಬಾವುಟ ', ಮುಂತಾದ ಕೃತಿಗಳನ್ನು ರಚಿಸಿರುವ ಬಿ.ಎಂ.ಶ್ರೀ ಶಿಕ್ಷಕ ರಾಗಿದ್ದರು .ಗ್ರಂಥ ಸಂಪಾದಕ ,ಕವಿ ,ಹಾಗು ನಾಟಕಕಾರರಾಗಿದ್ದ ಇವರು ಕನ್ನಡ ಕವಿ ಪುಂಗವರು.

ಕನ್ನಡ ಕವಿ ಮುದ್ದಣ:
ನಂದಳಿಕೆ ನಾರಣಪ್ಪ ಮುದ್ದಣ ದಿನಾಂಕ ೨೪-೦೧-೧೮೭೦ ರಲ್ಲಿ ಜನಿಸಿದರು.ಇವರು ಹೊಸಗನ್ನಡ ಕಾವ್ಯಕ್ಕೆ ನಾಂದಿ ಹಾಡಿದವರು . 'ರಾಮಾಶ್ವ ಮೇಧಂ 'ಇವರ ಮೌಲಿಕ ಕೃತಿ .ಕನ್ನಡ ಕತ್ತುರಿಯಲ್ತೆ ಎಂದ ಅವರು ಪ್ರಾತ:ಸ್ಮರಣೀಯರು.

ದ .ರಾ .ಬೇಂದ್ರೆ :
೩೧-೦೧-೧೮೯೬ ರಲ್ಲಿ ಧಾರವಾಡದಲ್ಲಿ ಜನಿಸಿದ ಡಾ.ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ದ ಕವಿಗಳು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಇವರು "ವರಕವಿ' ಎಂದೇ ಪ್ರಸಿದ್ದರು.ಜ್ಞಾನಪೀಠ ಪ್ರಶಸ್ತಿ ಯನ್ನೂ ಪಡೆದಿರುವ ಇವರು ,'ನಾಕು ತಂತಿ ' 'ಅರಳುಮರಳು' 'ನಾದಲೀಲ. ಶಿವಮೊಗ್ಗಾ ದಲ್ಲಿ ನಡೆದ ೨೭ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.

ಕೆ.ಎಸ್ .ನ.:
'ಶೃಂಗಾರ ಕವಿ' ಎಂದೇ ಪ್ರಸಿದ್ದರಾಗಿದ್ದ ಡಾ.ಕೆ.ಎಸ್ ನರಸಿಂಹಸ್ವಾಮಿ ೨೬-೦೧ ೧೯೧೫ರಲ್ಲಿ ಜನಿಸಿದರು.'ಮೈಸೂರು ಮಲ್ಲಿಗೆ'ಕವನ ಸಂಕಲನದಿಂದ ಕನ್ನಡ ನಾಡಿನ ಮನೆಮಾತಾಗಿರುವ ಇವರು ೧೯೭೨ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ,೧೯೯೯ ರ ಕೇಂದ್ರ ಸಾಹಿತ್ಯ ಅಕಾಡೆಮಿ ಯಾ ಫೆಲೋಶಿಪ್ ಪಡೆದರು.ಇವರು ಉತ್ತಮ ಅನುವಾದಕರು,ಹಾಗು ಮಕ್ಕಳ ಸಾಹಿತ್ಯ ರಚನೆಕಾರರು . 'ಹಾಡು ಹಸೆ 'ಇವರ ಕವನ ಸಂಕಲಗಳಲ್ಲೊಂದು.

ಕು.ವೆಂ.ಪು :
ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಸ್ಥಾನ ತಂದು ಕೊಟ್ಟವರು ಈ ರಸಋಷಿ .ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಇವರ ಪೂರ್ಣ ನಾಮಧೇಯ .೨೯-೧೨-೧೯೦೪ ರಂದು ಜನಿಸಿದರು .ಕನ್ನಡ ಕಾವ್ಯ ಪ್ರಪಂಚದಲ್ಲಿ ಹೊಸ ಚಿಂತನೆ ಹುಟ್ಟುಹಾಕಿದರು .ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು .ಇವರ ಕವನ 'ಜಯ ಭಾರತ ಜನನಿಯ ತನುಜಾತೆ ' ನಾದ ಗೀತೆಯ ಸ್ಥಾನ ಪಡೆದಿದೆ .ಇವರು ಮಹರಾಜ ಕಾಲೇಜಿನ ಪ್ರಾಂಶುಪಾಲ ರಾಗಿ ಸೇವೆ ಸಲ್ಲಿಸಿದರಲ್ಲದೆ,ಮೈಸೂರು ವಿಶ್ವ ವಿದ್ಯಾಲಯದ ಉಪ ಕುಲಪತಿಯಾಗಿ ಕಾರ್ಯ ನಿರ್ವಹಿಸಿದರು. ಇವರ ೩೦ ಕ್ಕೂ ಹೆಚ್ಹು ಕವನ ಸಂಕಲನ ಗಳು. ಪ್ರಕಟವಾಗಿವೆ .ನಾಟಕ ,ಕಾದಂಬರಿ ಮಕ್ಕಳ ಸಾಹಿತ್ಯ ಹಾಗೂ ವಿಮರ್ಶೆಯಲ್ಲಿಯೂ ಅಸಾದಾರಣ ಪ್ರತಿಭೆ ತೋರಿದರು .ಇವರು
'ರಾಷ್ಟ್ರಕವಿ ' 'ಪದ್ಮ ವಿಭೂಷಣ''ಪಂಪ ಪ್ರಶಸ್ತಿ'ಮತ್ತಿತರ ಸನ್ಮಾನಗಳಿಗೆ ಪಾತ್ರರಾಗಿದ್ದರು.

ಬೀ chi.
೨೩-೦೪-೧೯೧೩ ರಲ್ಲಿ ಜನಿಸಿದ ರಾಯಸೇನ ಭೀಮಸೇನ ರಾವ್, ಭಿ.chi. ಎಂದೇ ಪ್ರಸಿದ್ದರು .೩೫ ಕಾದಂಬರಿ ಗಳೂ ಸೇರಿದಂತೆ ೬೦ ಕ್ಕೂ ಹೆಚ್ಹು ಕೃತಿಗಳನ್ನು ರಚಿಸಿದ್ದಾರೆ . ಇವರ 'ತಿಮ್ಮ ರಸಾಯನ' ಒಂದು ಅಪರೂಪದ ತಿಳಿಹಾಸ್ಯ ಕೃತಿ. ಅದರಲ್ಲಿ 'ತಿಮ್ಮ ನ ಪಾತ್ರ ವಿಶಿಷ್ಟ ವಾಗಿದೆ.
ಇವರು ಹಾಸ್ಯ ಬ್ರಹ್ಮ ಎಂದೇ ಪ್ರಸಿದ್ದರಾಗಿದ್ದರು .ರೇಡಿಯೋ ನಾಟಕಗಳು,ಇವರ ಮೊದಲಕ್ರುತಿ.೩೫ಕ್ಕೂ ಹೆಚ್ಹು ಕಾದಂಬರಿ ಗಳು ಅನೇಕ ನಗೆಬರಹಗಳು ,ಏಕಾಂಕ ನಾಟಕಗಳು ,ಸೇರಿ ೬೦ಕ್ಕೂ ಹೆಚ್ಹು ಕೃತಿಗಳನ್ನು ರಚಿಸಿದ್ದಾರೆ.'ದೇವರಿಲ್ಲದ ಗುಡಿ'ಅವರ ರಷ್ಯಾ ಪ್ರವಾಸ ಕಥನ .'ನನ್ನ ಭಯಾಗ್ರಫಿ'ಇವರ ಆತ್ಮಕಥನ .'ತಿಮ್ಮನ ತಲೆ'ಕೃತಿಗೆ ಮದರಾಸು ಸರ್ಕಾರದ ಪ್ರಶಸ್ತಿ ದೊರಕಿತ್ತು.'ಚಿನ್ನದ ಕಸ 'ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ಅ.ನ.ಕೃ. :
ಇವರೊಬ್ಬ ಕನ್ನಡದ ಪ್ರಖ್ಯಾತ ಕಾದಂಬರಿಕಾರ ರಲ್ಲದೆ ಕನ್ನಡನಾಡು ,ನುಡಿಯ ಬಗ್ಗೆ ಮಂಚೂಣಿ ಹೋರಾಟಗಾರರಾಗಿ ತನು ಕನ್ನಡ ,ಮನ ಕನ್ನಡ ,ನುಡಿ ಕನ್ನಡ ಎಂದು ಬದುಕಿರುವವರೆಗೂ ನಂಬಿ ,ಕನ್ನಡಿಗರಲ್ಲಿ ಕನ್ನಡತನವನ್ನು ಬಡಿದೆಬ್ಬಿಸಿದ ಪ್ರಮುಖರು.ಅವರು ಹುಟ್ಟಿದ್ದು ಹಾಸನ
ಜಿಲ್ಲೆಯ ಅರಕಲಗೂಡು. ಮೊದಲು ನಾಟಕವೊಂದನ್ನು ರಚಿಸಿದರು .'ಮದುವೆಯೋ ಮನೆಹಾಳೋ' ಎಂಬುದೇ ಆ ನಾಟಕ.ಇವರ ಮೊದಲ ಕಾದಂಬರಿ -ಜೀವನ ಯಾತ್ರೆ. ಮುಂದೆ,ಸಂಧ್ಯಾರಾಗ ,ಉದಯರಾಗ,ಸಾಹಿತ್ಯರತ್ನ,ನಟ ಸಾರ್ವಭೌಮ ,'ವಿಜಯನಗರ ಸಾಮ್ರಾಜ್ಯ 'ಮಾಲೆಯ
ಹತ್ತು ಸಂಪುಟಗಳು,ಇಂದಿಗೂ ಮಹತ್ವದ ಕ್ರುತಿಗಳೆನಿಸಿವೆ. ೧೪ ಐತಿಹಾಸಿಕ ಕಾದಂಬರಿಗಳೂ ಸೇರಿ ೧೧೬ ಕಾದಂಬರಿಗಳನ್ನು ಇವರು ಬರೆದಿದ್ದಾರೆ.ಅಗ್ನಿಕನ್ಯೆ,ಕಣ್ಣಾ ಮುಚ್ಚಾಲೆ ,ಕಾಮನಸೋಲು ,ಕಿಡಿ,ಪಾಪಪುಣ್ಯ ಇವರ ಕಥಾ ಸಂಕಲನಗಳು.ಅನೇಕ ಸಾಮಾಜಿಕ ,ಐತಿಹಾಸಿಕ ಹಾಗು ಪೌರಾಣಿಕ ನಾಟಕಗಳನ್ನು ರಚಿಸಿ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲಿ ಬರೆದು ಭೇಷ್ ಎನಿಸಿಕೊಂಡಿದ್ದಾರೆ.'ಕಥಾಂಜಲಿ' 'ವಿಶ್ವವಾಣಿ' 'ಕನ್ನಡ ನುಡಿ' 'ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ' ಮುಂತಾದವುಗಳ ಸಂಪಾದಕರಾಗಿ ,ಚಲನ ಚಿತ್ರೋದ್ಯಮದಲ್ಲಿ ಸಕ್ರೀಯರಾಗಿ ಪ್ರಗತಿಶೀಲ ಚಳುವಳಿಯ ಮುಂದಾಳಾಗಿ ದುಡಿದರು.

ಮಣಿಪಾಲದಲ್ಲಿ ನಡೆದ ೪೨ ನೇಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿ ಅವರನ್ನು ಆಯ್ಕೆ ಮಾಡಿ ಕನ್ನಡನಾಡು ಅವರನ್ನು ಗೌರವಿಸಿತು.
ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ಯನ್ನೂ ಪಡೆದ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಯಾ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.೮ ಮಂದಿ ಸಾಹಿತಿಗಳು ಅ.ನ ಕೃ. ಬಗ್ಗೆ ಗ್ರಂಥ ರಚಿಸಿ ಗೌರವ ತೋರಿದ್ದಾರೆ.

ತ.ರಾ.ಸು.:
ತಳುಕಿನ ರಾಮಚಂದ್ರಯ್ಯ ಸುಬ್ಬರಾವ್ -ತ.ರಾ.ಸು.ಎಂದೇ ಪ್ರಸಿದ್ದರು .೨೧-೦೪-೧೯೨೦ ರಲ್ಲಿ ಚಿತ್ರದುರ್ಗ ಜಿಲ್ಲೆ ,ಚಳ್ಳಕೆರೆ ತಾಲೂಕಿನ ತಳುಕು
ಎಂಬಲ್ಲಿ ಹುಟ್ಟಿದರು .ಇವರ ಐತಿಹಾಸಿಕ ಕಾದಂಬರಿಗಳನ್ನು ಓದುವುದೆಂದರೆ ಅದೊಂದು ತರಹ ರೋಮಾಂಚನ ಅನುಭವ.ಐತಿಹಾಸಿಕ ಕಾದಂಬರಿಗಳ ಸಾರ್ವಭೌಮ ರೆನಿಸಿಕೊಂಡಿದ್ದ ಇವರು,ಎಚ್.ಏ ಇತಿಹಾಸದ ಬಗ್ಗೆ ,ಸರಣಿ ಐತಿಹಾಸಿಕ ಕಾದಂಬರಿಗಳನ್ನು ಬರೆದರು.ಇವರ 'ದುರ್ಗಾಸ್ತಮಾನ' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಹೀಗೆ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದವರ ಸಾಲು ಬಹಳ ದೊಡ್ಡದು.ಇತ್ತೀಚಿನವರಲ್ಲಿ ಪ್ರೊ.ನಿಸಾರ್ ಅಹಮೆದ್ ,ಡಾ.ಅಕಬರ ಅಲಿ ,ವಿಜಯ ಸಾಸನೂರ, ಡಾ . ಎಚ್ ಎಲ್. ನಾಗೇಗೌಡ ,ಪಾಟಿಲ ಪುಟ್ಟಪ್ಪ ,ಡಾ.ಸುರ್ಯನಾಥಕಾಮತ್ ,ಡಾ.ಗಿರೀಶ್ ಕಾರ್ನಾಡ್ , ಯು .ಆರ್. ಅನಂತ ಮೂರ್ತಿ ,ಬರಗೂರ್ ರಾಮಚಂದ್ರಪ್ಪ ,ಪಿ.ಲಂಕೇಶ್, ಮುಖ್ಯವಾಗಿ ಎಸ್.ಎಲ್.ಭೈರಪ್ಪ ಹೀಗೆ ಬೆಳೆಯುತ್ತದೆ ಪಟ್ಟಿ.

ಇನ್ನು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸುವುದರಲ್ಲಿ ಕನ್ನಡ ನಾಡಿನ ಮಹಿಳೆಯರೂ ಹಿಂದೆ ಬಿದ್ದಿಲ್ಲ . ಕನ್ನಡದ ಪ್ರಥಮ ಕಾದಂಬರಿಗಾರ್ತಿ ತಿರುಮಲಾಂಬ ಅವರಿಂದ ಹಿಡಿದು ,ತ್ರಿವೇಣಿ ,ವಾಣಿ ,ವೈದೇಹಿ ,ಎಂ ಕೆ ಇಂದಿರಾ, ಆರ್ಯಾಂಬ ಪಟ್ಟಾಭಿ , ಡಾ.ಅನುಪಮ ನಿರಂಜನ ,ಅಶ್ವಿನಿ [ಶ್ರೀಮತಿ.ಎಂ.ವಿ.ಕಮಲಮ್ಮ ],ಎಚ್ .ಜಿ ರಾಧಾದೇವಿ ,ಸಾಯಿಸುತೆ ,ಉಷಾ ನವರತ್ನ ರಾವ್, ಏನ್.ಪಂಕಜ , kodagina gouramma ,h.es.paarvati. hiige aneka kaadambarigaartiyaru kannada saahitya kshetrakke tammade aada vishistha seve sallisiddaare.
vijayaa dabbe,vijayasree ,baanu mastaq, h.es.muktaayakka,innu muntaadavaru kannada kavana lokadalli tammade staanagalannu padedukondiddaare.
[ mundina blognalli muktaaya]






೧೪]ನವಂಬರ್ ೧ ,ನಮ್ಮ ಕನ್ನಡ [ಕರ್ನಾಟಕ] ರಾಜ್ಯೊತ್ಸವ ಭಾಗ - ೧

ಶ್ರೀ ವಿರೋಧಿನಾಮ ಸಂವತ್ಸರ ದಕ್ಷಿಣಾಯಣ ಶರದೃತು ಕಾರ್ತಿಕ ಮಾಸ -ಶುಕ್ಲಪಕ್ಷ -ಚತುರ್ದಶಿ ಭಾನುವಾರ ,
ನವಂಬರ್ - ,೨೦೦೯ ಇಂದು ನಮ್ಮ ಕನ್ನಡ ರಾಜೋತ್ಸವ.
ಭಾಷೆಗಳ ಆಧಾರದ ಮೇಲೆ ,ಭಾರತ ಸರ್ಕಾರ ೧೯೫೬ ರ ನವಂಬರ್ ೧ ರಂದು ರಾಜ್ಯಗಳನ್ನು ಪುನರ್ ವಿಂಗಡಣೆ ಮಾಡಿತು.
೧೯೫೬ ರ ಹಿಂದೆ ನಮ್ಮ ಕನ್ನಡನಾಡು ಮೈಸೂರು ,ಬಾಂಬೇ ,ಮದ್ರಾಸ್ ,ಹಾಗು ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿತ್ತು .ಈ ಕನ್ನಡ ಮಾತನ್ನಾಡುವ ಪ್ರದೆಶಗಳನ್ನೆಲ್ಲ ಸೇರಿಸಿ ನಮ್ಮ ರಾಜ್ಯ ಉದಯವಾಯಿತು .ಆಗ ಅದು ಮೈಸೂರು ರಾಜ್ಯ ವಾಯಿತು.೧೯೭೩ರ ನವಂಬರ್ ೧ ರಂದು ,ನಮ್ಮ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಡಿ .ದೇವರಾಜಅರಸ್ ನಮ್ಮ ರಾಜ್ಯಕ್ಕೆ 'ಕರ್ನಾಟಕ' ಎಂದು ಪುನರ್ ನಾಮಕರಣ ಮಾಡಿದರು .ಈ ಹಿನ್ನೆಲೆಯಲ್ಲಿ ನವಂಬರ್ ೧ ನ್ನು ಕನ್ನಡ ರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ.
"ಕರ್ನಾಟಕದ ಬಗ್ಗೆ ಯಾವ ಕನ್ನಡಿಗನ ಹೃದಯ ಮಿಡಿಯುವುದಿಲ್ಲವೋ ,ಅದು ಹೃದಯವಲ್ಲ ಕಲ್ಲಿನ ಬಂಡೆ' ಎಂದ ಕರ್ನಾಟಕ ಕುಲ ಪುರೋಹಿತ ,ಕನ್ನಡ ತಪಸ್ವಿ ಆಲೂರು ವೆಂಕಟ ರಾಯರು ಕನ್ನಡ ನಾಡಿನ ಮೂಲೆ ಮೂಲೆಗೂ ತಿರುಗಿ ಕನ್ನಡಕ್ಕಾಗಿ ಶ್ರಮಿಸಿದರು . ಅಲೂರು ಮತ್ತು ಅನೇಕ ಅನೇಕ ಹಿರಿಯರ ಪರಿಶ್ರಮದ ಫಲವಾಗಿ ೧೯೫೬ ರಲ್ಲಿ
ಅನೇಕ ಹಿರಿಯರ ಪರಿಶ್ರಮಏಕೀಕೃತ ಕನ್ನಡನಾಡು ರೂಪಗೊಂಡಿತು ಎಂಬುದನ್ನೂ ನಾವುಮರೆಯಲಾಗದು.
ಕನ್ನಡ ಭಾಷೆ ,ನೆಲ ಜಲ ಅಭಿವೃದ್ದಿಗಾಗಿ ಅನೇಕ ಮಹನೀಯರುಗಳು ಅವಿರತ ಶ್ರಮವಹಿಸಿದ್ದಾರೆ .ಅವರುಗಳಲ್ಲಿ ಕೆಲವರನ್ನಾದರೂ ಸಮಯದಲ್ಲಿ ನೆನಪು ಮಾಡಿಕೊಳ್ಳೋಣ.
ತಳುಕಿನ ವೆಂಕಣ್ಣಯ್ಯ :
೦೧-೧೦-೧೮೮೫ ರಂದು ಚಿತ್ರದುರ್ಗ ಜಿಲ್ಲೆಯ 'ತಳುಕು' ಎಂಬಲ್ಲಿ ಜನಿಸಿದ ಟಿ.ಎಸ್.ವೆಂಕಣ್ಣಯ್ಯ ಕನ್ನಡದ 'ಅಶ್ವಿನಿ ದೇವತೆ' ಗಳಲ್ಲಿ ಒಬ್ಬರು.
ಮೈಸೂರು ವ್ವಿಶ್ವವಿದ್ಯಾಲಯದ ಪ್ರಥಮ ಕನ್ನಡ ಪ್ರಾಧ್ಯಾಪಕರು .ಹರಿಶ್ಚಂದ್ರ ಕಾವ್ಯ ಸಂಗ್ರಹ ,ಕರ್ನಾಟಕ ಕಾದಂಬರಿ ಸಂಗ್ರಹ ,ಬಸವರಾಜ ದೇವರಗಳೆ,ಸಿದ್ದರಾಮಚರಿತೆಯ ಸಂಗ್ರಹ ,ಪ್ರಾಚೀನ ಸಾಹಿತ್ಯ -ಇವರ ಮುಖ್ಯ ಕೃತಿಗಳು.

ತಿರುಮಲಾಂಬ:
ಕನ್ನಡದ ಪ್ರಪ್ರಥಮ ಕಾದಂಬರಿಗಾರ್ತಿ .ನಂಜನಗೂಡಿನಲ್ಲಿ [೦೧-೧೦-೧೮೮೭] ಜನನ.೧೯೧೩ರಲ್ಲಿ 'ಸತಿ ಹಿತೈಷಿಣಿ 'ಗ್ರಂಥ ಮಾಲೆ ಆರಂಬಿಸಿ
"ಸುಶೀಲ' ಎಂಬ ಕಾದಂಬರಿ ಪ್ರಕಟಿಸಿ ಕನ್ನಡದ ಮೊದಲ ಪ್ರಕಾಶಕಿ -ಮುದ್ರಕಿ ಎನಿಸಿಕೊಂಡರು.
ಹುಯಿಲಗೋಳ ನಾರಾಯಣರಾಯರು :
'ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು 'ಎಂಬ ತಮ್ಮ ಗೀತೆಯಿಂದ ಜನಮನ ಸೂರೆಗೊಂಡು ,ಪ್ರಖ್ಯಾತಿಯಾದ ಹುಯಿಲಗೋಳನಾರಾಯಣರಾಯರು ,ಉತ್ತಮ ಶಿಕ್ಷಕರು ,ವಕೀಲರಾಗಿದ್ದರು. ಇವರು ಪ್ರಶಸ್ತಿವಿಜೇತ ನಾಟಕಕಾರರು ಆಗಿದ್ದರು.

ಡಾ.ಶಿವರಾಮ ಕಾರಂತರು:
೧೦-೧೦-೧೯೦೨ ರಂದು ದಕ್ಷಿಣ ಕನ್ನಡ ಜಿಲ್ಲೆಯ ಕೋಟಾ ದಲ್ಲಿ ಜನಿಸಿದ ಡಾ.ಶಿವರಾಮ ಕಾರಂತರು ಕಡಲ ತೀರದ ಭಾರ್ಗವ ಎಂದೇ ಪ್ರಖ್ಯಾತಿ .೧೯೫೫ ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿದ್ದ ಇವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕೃತರು .ಇವರು ಯಕ್ಷಗಾನ ಕಲೆಯಲ್ಲಿ ಅತ್ಯಂತ ನಿಪುಣರಾಗಿದ್ದರು


ಡಾ.ಮಾಸ್ತಿ ವೆಂಕಟೇಶ ಅಯಂಗಾರ್:
'ಸಣ್ಣ ಕತೆಗಳ ಬ್ರಹ್ಮ 'ಎಂದೇ ಪ್ರಸಿದ್ದ. ಕನ್ನಡದ ಆಸ್ತಿ, ಮಾಸ್ತಿ ವೆಂಕಟೇಶ ಅಯಂಗಾರ್ ಹುಟ್ಟಿದ್ದು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ,೦೬-೦೮-೧೮೯೧ ರಂದು. ಇವರು ಜ್ಞಾನ ಪೀಠ ಪ್ರಶಸ್ತಿ ವಿಜೇತರು. ಕತೆಗಾರರೂ ,ನಾಟಕಕಾರರೂ,ವಿಮರ್ಶಕರೂ, ಪತ್ರಿಕಾ ಸಂಪಾದಕರೂಆಗಿದ್ದರು.೧೯೨೯ರ ಬೆಳಗಾವಿ , ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು .ಇವರು 'ಶ್ರೀನಿವಾಸ' ಎಂಬ ಕಾವ್ಯ ನಾಮ ದಿಂದಪ್ರಸಿದ್ದರು.

ಪಂಜೆ ಮಂಗೇಶರಾಯರು:
ಇವರು ಕನ್ನಡ ಶಿಶು- ಸಾಹಿತ್ಯದ ಪಿತಾಮಹರು.ಇವರ ಕಾವ್ಯ ನಾಮ 'ಕವಿಶಿಷ್ಯ'. ದಿನಾಂಕ ೨೨-೦೨-೧೮೭೪ ರಲ್ಲಿ ಜನಿಸಿದರು. ಕನ್ನಡ ಪಂಡಿತರುಶಿಕ್ಷಣ ತಜ್ಞರು ,ಅರ್ಥಶಾಸ್ತ್ರ ವಿಶಾರದ ರಾಗಿದ್ದರು. ಕನ್ನಡದಲ್ಲಿ ಸುಧಾರಣೆಗಳು,ಮತ್ತು ಕೋಟಿ ಚನ್ನಯ್ಯ ಇವರ ಕೃತಿಗಳು. ೧೯೩೪ ರಲ್ಲಿ ನಡೆದಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು .

,
'ಸತ್ಯಕಾಮ' [ಅನಂತಾಚಾರ್ಯ ಕೃಷ್ಣಾಚಾರ್ಯ ಶಹಾಪುರ] :
ದಿನಾಂಕ ೦೨-೦೩-೧೯೨೦ ರಲ್ಲಿ ಬಿಜಾಪುರ ಜಿಲ್ಲೆಯ ಗಲಗಲಿ ಯಲ್ಲಿ ಜನಿಸಿದರು.ಕತೆ ,ಕವಿತೆ ,ಕಾದಂಬರಿ ಗಳನ್ನೂ ಬರೆದು ಪ್ರಸಿದ್ದರಾಗಿದ್ದರು.
ಸ್ವಾತಂತ್ರ್ಯ ಚಳುವಳಿ ಕಾಲದಲ್ಲಿ ಪತ್ರಿಕೆಗಳ ಸಂಪರ್ಕ ಹೊಂದಿದ್ದರು.'ಕಪಿಲ ವಸ್ತು','ರಾಜಬಲಿ ' ,ಬೃಹಸ್ಪತಿ' ಲಾವಣ್ಯ'ಶೃಂಗಾರ ತೀರ್ಥ ' ಚಂಡ-ಪ್ರಚಂಡ ಇವರ ಕೃತಿಗಳು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರು.

ಕಾರ್ನಾಡು ಸದಾಶಿವರಾಯರು:
ದಿನಾಂಕ ೦೧-೦೪ ೧೮೮೧ ರಲ್ಲಿ ಮಂಗಳೂರಿನಲ್ಲಿ ಜನಿಸಿದರು.ಇವರು ವಕೀಲರಾಗಿದ್ದರು.ಅಪ್ಪಟ ಗಾಂಧೀ ವಾದಿಗಳು. ಗಾಂಧೀಜಿಯವರೊಂದಿಗೆಸತ್ಯಾಗ್ರಹ ಪ್ರತಿಜ್ಞೆಗೆ ಸಹಿ ಹಾಕಿದ ಮೊದಲ ಕನ್ನಡಿಗರು.ದೇಶ ಸೇವೆಗಾಗಿ ತಮ್ಮ ಆಸ್ತಿ-ಪಾಸ್ತಿ ಆರೋಗ್ಯಗಳನ್ನು ಮುಡುಪಾಗಿಟ್ಟ ರು.
ಬೆಂಗಳೂರಿನ ಪ್ರಖ್ಯಾತ ಬಡಾವಣೆಯೊಂದಕ್ಕೆ ಇವರ ಹೆಸರನ್ನು ಇಟ್ಟಿರುವುದನ್ನು ಗಮನಿಸಬಹುದು.

ಡಾ.ರೆವರೆಂಡ್ ಕಿಟ್ಟೆಲ್:
ಜರ್ಮನಿಯಲ್ಲಿ ೦೭-೦೪-೧೮೩೨ ರಲ್ಲಿ ಹುಟ್ಟಿದರು.ನಮ್ಮ ಭಾರತ ದೇಶಕ್ಕೆ ಆಗಮಿಸಿ ಕರ್ನಾಟಕದಲ್ಲಿ ನೆಲೆಸಿದ ಇವರು ಕನ್ನಡ ಭಾಷೆಗೆ ಅಪೂರ್ವ
ಸಲ್ಲಿಸಿದರು. ಕನ್ನಡ -ಇಂಗ್ಲಿಷ್ ನಿಘಂಟು,ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ ,ಮತ್ತು ಸಂಪಾದಿತ ಕೃತಿಗಳಾದ 'ಕೇಶಿರಾಜನ -'ಶಬ್ದಮಣಿ ದರ್ಪಣ',ನಾಗವರ್ಮನ 'ಚಂದೊಮ್ಬುಧಿ ' ಕಿಟ್ಟೆಲ್ ಪಾಂಡಿತ್ಯಕ್ಕೆ ಸಾಕ್ಷಿ.
[ಮುಂದಿನ ಬ್ಲಾಗ್ ನಲ್ಲಿ ಮತ್ತಷ್ಟು ಮಹನಿಯರುಗಳು]

ದಿನದ ಸ್ಪಂದನ:
ಕನ್ನಡ ನಾಡು,ನುಡಿ,ಸಂಸ್ಕೃತಿಗಳ ಸಂವರ್ದನೆ ಹಾಗು ಸಂರಕ್ಷಣೆಗಾಗಿ ಕಳೆದ ತೊಂಬತ್ತು ವರ್ಷಗಳಿಂದ ಶ್ರಮಿಸುತ್ತಾ ಬಂದಿರುವ ಏಕೈಕಪ್ರಾತಿನಿಧಿಕ ಸಂಸ್ಥೆ :ಕನ್ನಡ ಸಾಹಿತ್ಯ ಪರಿಷತ್ತು .
ಪರಿಷತ್ತಿನ ಬಹುಮುಖೀ ಅಸ್ತಿತ್ವದ ಒಂದು ಪ್ರಧಾನ ಕಾರ್ಯ ಕ್ಸೇತ್ರ :ಪುಸ್ತಕ ಪ್ರಕಟಣೆ .ಈವರೆಗೆ ಒಂದು ಸಾವಿರಕ್ಕೂ ಹೆಚ್ಚು ಅಮೂಲ್ಯ ಕೃತಿಗಳುಪ್ರಕಟಗೊಂಡು ನಾಡಿನ ತುಂಬಾ ಅಕ್ಷರದ ಬೆಳಕನ್ನು ಹರಡಿವೆ.ಕನ್ನಡ ಜನತೆ ಕೂಡ ಅತ್ಯಂತ ಪ್ರೀತಿಯಿಂದ ಜ್ಞಾನ ದಾಸೋಹದಲ್ಲಿಪಾಲುಗೊಂಡಿದೆ.
[ಕನ್ನಡ ನಾಡಿನ ಚರಿತ್ರೆ -ಭಾಗ - ಹಿನ್ನುಡಿ ಯಿಂದ ]


ಕನ್ನಡ ಕಂದನ ಮೊದಲ ತೊದಲ ನುಡಿ -'ಅಮ್ಮ'
ನಂತರ ಏನಿದ್ದರೂ ಉಳಿದ 'ಸರಿಗಮ
___
------------------------------------------------------ಓಂ--------------------------------------------------------------