ಸೋಮವಾರ, ಅಕ್ಟೋಬರ್ 5, 2009

ನನ್ನ ಹೊಸ ಬ್ಲಾಗ್ ಗೆಳೆಯರಿಗೆ ನಮಸ್ಕಾರ

ಜನನಿ ಹಾಗು ಜನ್ಮಭೂಮಿಗೆ ವಂದಿಸಿ ನನ್ನ ಈ ಬ್ಲಾಗ್ ಗೆ ಅಡಿಯಿರಿಸುತ್ತಿದ್ದೇನೆ .ಬ್ಲಾಗ್ ಗೆಳೆಯರೇ ನನಗೆ ಶುಭಾಷಯ
ಕೋರುತ್ತೀರಾ ತಾನೆ ?
ದಿನ ನಿತ್ಯ ನಾನು ಪತ್ರಿಕೆ ಓದಿದಾಗ , ದೂರದರ್ಶನದಲ್ಲಿ ವಾರ್ತೆಗಳನ್ನು ಹಾಗು ಇತರೆ ಸುದ್ದಿಗಳನ್ನು ಕೇಳಿದಾಗ ಕೆಲವು
ವಿಷಯಗಳ ಬಗ್ಗೆ ಗೊಂದಲ ಉಂಟಾಗುತ್ತದೆ. ಮುಖ್ಯವಾಗಿ ರಾಜಕಾರಣಿಗಳ ಗೊಸುಂಬೆತನದ ಬಗ್ಗೆ , ರಾಜ್ಯದ,ದೇಶದ ಬಗ್ಗೆ
ಅವರಿಗಿರುವ ನಿಷ್ಕಾಳಜಿಯ ಬಗ್ಗೆ ಬೇಸರ ಉಂಟಾಗುತ್ತದೆ .ಇತ್ತೀಚಿನ ಕೆಲವು ಘಟನೆಗಳು ಹಾಗು ಬೆಳವಣಿಗೆಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮಾರಕವಾಗಿರುವುದು ಒಂದು ಅಪಾಯಕಾರಿ ಬೆಳವಣಿಗೆ ಎಂದು ನಿಮಗೆ ಅನಿಸುವುದಿಲ್ಲವೇ ?ದೇಶದ ಬಗ್ಗೆ ಕಾಳಜಿ ಯುಳ್ಳ ಯಾರಿಗಾದರೂ ಆತಂಕ ವಾಗುವುದು ಸಹಜ .ಆದರೆ ಜನಸಾಮಾನ್ಯರು ಏನು ಮಾಡಲೂ ಸಾಧ್ಯವಾಗದೆ ಅಸಹಾಯಕರಾಗಿದ್ದಾರೆ .ಇದು ಸತ್ಯ ತಾನೆ? ಉನ್ನತ ಸ್ಥಾನಗಳಲ್ಲಿರುವ ವ್ಯಕ್ತಿಗಳೇ ಮೌಲ್ಯಗಳಿಗೆ ತಿಲಾಂಜಲಿನೀಡಿ ಕೇವಲ ಸ್ವಾರ್ಥ ಸಾದನೆಗೊಸ್ಕರ ದೇಶದ ನೈತಿಕ ಪ್ರಭುದ್ದತ್ಹೆಯನ್ನು ಅಡವಿಟ್ಟು ಹುಂಬ ರಾಗುತ್ತಿರುವುದು ಏನನ್ನು ಸೂಚಿಸುತ್ತದೆ ?ದುರದೃಷ್ಟಕರ ಸಂಗತಿಯೆಂದರೆ ನಮ್ಮ ನ್ಯಾಯಾನ್ಗದಲ್ಲಿಯೂ ನೈತಿಕ ಬಿಕ್ಕಟ್ಟು ತಲೆದೋರಿರುವುದು ನಮ್ಮ ಅಧಃಪತನಕ್ಕೆ ಸಾಕ್ಷಿ . ಇಂತಹ ಅನೇಕ ವಿಷಯಗಳನ್ನು ಸಮನಸ್ಕರೊಂದಿಗೆ ಹಂಚಿ ಕೊಳ್ಳೋಣ ವೆನಿಸಿದ್ದು ನಿಜ.ಯಾವುದು ಸರಿ ? ಯಾವುದು ತಪ್ಪು? ಹೆಸರು ಗಳಿಸಬೇಕೆಂಬ ಉತ್ಕಟ ಆಸೆ ಯಿರದಿದ್ದರೂ ,ಕಥೆ ,ಕವನ ,ಲೇಖನ ಹಾಗು ಹಾಡುಗಳನ್ನು ಬರೆಯಬೇಕೆಂಬ ಆಸೆ ಯಿತ್ತು .ಆ ದಿನಗಳಲ್ಲಿ ನಾನು ಹೆಚ್ಹಾಗಿ ಕನ್ನಡ ಕಾದಂಬರಿಗಳನ್ನು ಓದುತ್ತಿದ್ದೆ .ಎಚ್ .ಏನ್ ನರಸಿಂಹಯ್ಯ ,ರಾಮಮೂರ್ತಿ ,ಮಾ.ಭಿ.ಶೇಷಗಿರಿ ರಾವ್ ,ಅ .ನ .ಕೃಷ್ಣರಾವ್ , ತ.ರಾ ಸು. ರಾವಬಹಾದ್ದೂರ ಇವರುಗಳ ಕಾದಂಬರಿಗಳನ್ನು ಓದುತ್ತಿದ್ದೆ .ನನಗೂ ಬರಹಗಾರನಾಗಬೇಕೆಂಬ ಹುಚ್ಹು ಇತ್ತೆಂದು ಆಗಲೇ ಹೇಳಿದ್ದೇನೆ ಅಲ್ಲವೇ?
ಮತ್ತೆ ಭೇಟಿಯಾಗೋಣ . ವಂದನೆಗಳು.
ದಿನದ ಸ್ಪಂದನ - ಸಂಪೂರ್ಣ ಸ್ವಾಸ್ಥ್ಯಕ್ಕಾಗಿ ಸಾತ್ವಿಕ ಆಹಾರ .
ಬೇಲೂರು ದ.ಶಂ.ಪ್ರಕಾಶ [ದಬ್ಬೆ ಶಂಕರ ನಾರಾಯಣ
ಭಟ್ಟ ಪ್ರಕಾಶ್ ]

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ