ಗುರುವಾರ, ಅಕ್ಟೋಬರ್ 29, 2009

೧೩]'ಮತಾಂತರ 'ಕ್ಕೆ ಲವ್ ಜಿಹಾದ್ ಎಂಬ ಹೊಸ ಅಸ್ತ್ರ -ಭಾಗ -೩.

ಶ್ರೀ ವಿರೋಧಿನಾಮ ಸಂವತ್ಸರ ದಕ್ಷಿಣಾಯಣ ಶರದೃತು ಕಾರ್ತಿಕ ಮಾಸ ಶುಕ್ಲ ಪಕ್ಷ -ಗುರುವಾರ ೨೯-೧೦-೦೯.
ಮತಾಂತರ -ಲವ್ ಜಿಹಾದ್ -ಭಾಗ -೩. [ಮುಂದುವರೆದುದು]
ಇದುವರೆಗೂ ಈ ವಿಷಯದಲ್ಲಿ ಕಣ್ಣು ಮುಚ್ಚಿ ಕುಳಿತಿದ್ದ ನಮ್ಮ ಸರ್ಕಾರ ಈಗ ಎಚ್ಚೆತ್ತುಕೊಂಡಿದೆ .ಲವ್ ಜಿಹಾದ್ ಬಗ್ಗೆ ನಿಗಾ ವಹಿಸುವಂತೆಯೂ ಅದರ ಕಾರ್ಯ ವ್ಯಾಪ್ತಿಯ ಬಗ್ಗೆ ವಿವರ ವಾಗಿ ತಿಳಿಸುವಂತೆಯೂ ಸರ್ಕಾರಕ್ಕೆ ಹೈ ಕೋರ್ಟ್ ಆದೇಶಿಸಿದೆ. ಈ ಲವ್ ಜಿಹಾದ್ ಪ್ರಕರಣಗಳು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು ,ಇದರಿಂದ ಧಾರ್ಮಿಕ ಕ್ಷೋಭೆಗಳು ಉಂಟಾಗಬಹುದಾಗಿದ್ದು ,ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗಬಹುದು ಎಂದು ಮನ ಗಂಡಿರುವ ಹೈ ಕೋರ್ಟ್ ,ತಕ್ಷಣ ಈ ಬಗ್ಗೆ ಕಾರ್ಯೋನ್ಮುಖವಾಗುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.
ಈ ಲವ್ ಜಿಹಾದ್ ಪ್ರಕರಣಗಳು ಒಳ್ಳೆಯ ಬೆಳವಣಿಗೆಯಂತೂ ಅಲ್ಲವೇ ಅಲ್ಲ. ಇದು ಸಮಾಜದಲ್ಲಿ ಸಮುದಾಯ ಗಳೊಡನೆ ವೈಮನಸ್ಯ ಮೂಡಲು
ಕಾರಣವಾಗಬಹುದು .ದೇಶದಲ್ಲಿ ಮುಸ್ಲಿಂ ಬಾಹುಳ್ಯ ಉಂಟಾಗಬಹುದು. ಅವರೇ ಬಹುಸಂಖ್ಯಾತರಾಗಬಹುದು ಎಂಬ ದಿಗಿಲು !
ಅವರ ದಿಗಿಲಿಗೆ ಕಾರಣ ? ಮುಸ್ಲಿಮರು ಯಾವ ಯಾವ ಸ್ಥಳಗಳಲ್ಲಿ ಹೆಚ್ಚಾಗಿದ್ದಾರೆಯೋ ,ಅಂದರೆ ಬಹುಸಂಖ್ಯಾತರಾಗಿದ್ದಾರೆಯೋ ಆ ಸ್ತಳ ಗಳಲ್ಲಿ
ಅನ್ಯ ಧರ್ಮೀಯರು ಸಹಜವಾಗಿ ಬದುಕಲು ಸಾಧ್ಯವಿಲ್ಲ ಎಂಬ ನಂಬಿಕೆ. ಯಾವಾಗಲೂ ಭಯ -ಭೀತಿ ಗಳಿಂದ ಬದುಕು ನಡೆಸುವಂತೆ ಆಗಬಹುದು .ಅನೇಕ ಸಮಾಜಿಕ ,ಆರ್ಥಿಕ ನೈತಿಕ ವಿಪ್ಲವಗಳು ಉಂಟಾಗಬಹುದು ಎಂಬ ಭಯ.
ಮನೆ, ಮಠ ,ಆಸ್ತಿ -ಪಾಸ್ತಿ ಮಾರಿಕೊಂಡು ಸುರಕ್ಷಿತ ಸ್ಥಳಗಳಿಗೆ ಹೋಗಬೇಕಾಗಬಹುದೇನೋ ಎಂಬ ಭಯ .ಇದಕ್ಕೆ ಜೀವಂತ ಉದಾಹರಣೆ ಎಂದರೆ ನಮ್ಮ ಕಾಶ್ಮೀರ ರಾಜ್ಯದ್ದು. ಅಲ್ಲಿ ಅಲ್ಪ ಸಂಖ್ಯಾತ ಹಿಂದೂಗಳು ಸಹಜವಾಗಿ ಬದುಕಲು ಆಗುತ್ತಿಲ್ಲ .ಅನೇಕ ಹಿಂದೂ ದೇವಾಲಯಗಳನ್ನು ಕೆಡವಿಹಾಕಲಾಗಿದೆ. ಮನೆ ಮಠ ಗಳನ್ನೂ ನಾಶಪಡಿಸಲಾಗಿದೆ .ಆಸ್ತಿ-ಪಾಸ್ತಿ ಗಳನ್ನೂ ಬಲವಂತದಿಂದ ವಶಪಡಿಸಿಕೊಳ್ಳ ಲಾಗುತ್ತಿದೆ,ಎಂಬ ದೂರು ಇಂದು ನಿನ್ನೆಯದಲ್ಲ! ಇದರಿಂದಾಗಿ ಲಕ್ಷಾಂತರ ಹಿಂದೂ ಕುಟುಂಬಗಳು ಕಾಶ್ಮೀರರಾಜ್ಯ ವನ್ನು ತೊರೆದು ಬಂದಿದ್ದಾರೆ.
ಅಲ್ಲಿ ಹಿಂದೂ ಯುವತಿಯರ ಹಾಗು ಹೆಂಗಸರ ಮಾನಭಂಗ ನಿತ್ಯದ ಮಾಮೂಲಿ ವಿಷಯವಾಗಿಬಿಟ್ಟಿದೆ. ಅತ್ಯಾಚಾರವೆಸಗಿ ನಂತರ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ.ಮತಾಂತರಕ್ಕೆ ಒಪ್ಪದಿದ್ದರೆ ನಿಷ್ಕರುಣೆಯಿಂದ ಕೊಲೆ ಮಾಡಲಾಗುತ್ತದೆ ,ಮತಾಂತರಕ್ಕೆ ಒಪ್ಪಿದರೆ ಜೀವ ಸಹಿತ ಬಿಡಲಾಗುತ್ತದೆಯಂತೆ. ಇದು ಮುಸ್ಲಿಂ ಬಾಹುಳ್ಯ ವುಳ್ಳ ಸ್ತಳಗಳ ನರಕ ಸದೃಶ್ಯ ಬದುಕು.
ಪ್ರೀತಿಸಿ,ಪ್ರೇಮಿಸಿ ಮದುವೆಯಾಗುವುದೆನೂ ತಪ್ಪಿಲ್ಲ .ಅದು ಅಂತರ ಜಾತಿಯಾಗಿದ್ದರೂ ಪರವಾಗಿಲ್ಲ. ಆದರೆ ಉದ್ದೇಶ ಪೂರ್ವಕವಾಗಿ ಮಾಡಿ ಕೊಳ್ಳುವ ಪ್ರೇಮ ವಿವಾಹದ ಬಗ್ಗೆ ಜಗೃತಿಯಿಂದಿರಬೇಕಾದುದು ಇಂದಿನ ಅವಶ್ಯಕತೆ .

ಒಂದಂಶವನ್ನು ಇಲ್ಲಿ ಗಮನಿಸೋಣ.ಕಾಕತಾಳೀಯ ಎನಿಸ ಬಹುದು.ಬಾಲಿವುಡ್ ನ ಕೆಲವು ಪ್ರಖ್ಯಾತ ಮುಸ್ಲಿಂ ನಟರು ಹಿಂದೂ ಹುಡುಗಿಯರನ್ನು ಮದುವೆಯಾಗಿದ್ದಾರೆ.ತಪ್ಪೇನಿಲ್ಲ .ಇದು ಅವರ ಸ್ವಂತ ವಿಚಾರ. ಆದರೆ ಈ ವಿವಾಹಗಳು ಇತರ ಮುಸ್ಲಿಂ ಯುವಕರಿಗೆ ಪ್ರೇರಣೆ ಯಾಗಬಾರದೆನ್ದೆನೂ ಇಲ್ಲವಲ್ಲ. ಇದು ಅವರಿಗೆ ಆದರ್ಶ ಆದರೂ ಆಗಬಹುದು ಅಲ್ಲವೇ?
ಇನ್ನೊಂದು ವಿಚಾರ ಇಲ್ಲಿ ಗಮನಿಸಲು ಕುತೂಹಲವೆನಿಸುತ್ತದೆ. ಲವ್ ಜಿಹಾದ್ ಕೇವಲ ಹಿಂದೂ ಕುಟುಂಬಗಳನ್ನು ಮಾತ್ರ ಕಾಡುತ್ತಿಲ್ಲ ,ಕ್ರಿಶ್ಚಿಯನ್ ಸಮುದಾಯಕ್ಕೂ ಈ ಬಿಸಿ ತಟ್ಟಿದೆ. ಏಕೆಂದರೆ ಈ ಲವ್ ಜಿಹಾದ್ ಕೇವಲ ಹಿಂದೂ ಹುಡುಗಿಯರನ್ನು ಗಮನದಲ್ಲಿರಿಸಿಕೊಂಡು ರೂಪಿಸಿದ್ದಲ್ಲ, ಕ್ರಿಶ್ಚಿಯನ್ ಹುಡುಗಿಯರನ್ನು ಸಹ ಖೆಡ್ಡಾಕ್ಕೆ ಕೆಡವಲಾಗುತ್ತಿದೆ ಎಂದು ಆ ಸಮುದಾಯದವರು ಹೇಳುತ್ತಿದ್ದಾರೆ . ಪೆಡಂ ಭೂತ
ಹಿಂದೂ-ಕ್ರಿಶ್ಚಿಯನ್ ಎರಡು ಸಮುದಾಯಗಳನ್ನೂ ಕಾಡುತ್ತಿರುವ ಹಿನ್ನೆಲೆಯಲ್ಲಿ ,ಎರಡೂ ಜನಾಂಗದವರೂ ಈ ಪಿಡುಗನ್ನು ಒಗ್ಗಟ್ಟಾಗಿ ಎದುರಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ
ಜಿಹಾದ್ ಉದ್ದೇಶಕ್ಕೆ ಪ್ರೀತಿ ಬಳಕೆಯಾದರೆ ಅದು ಘೋರ.ಜಿಹಾದ್ ಉದ್ದೇಶಕ್ಕೆ ಪ್ರೀತಿ,ಪ್ರೇಮ -ವಿವಾಹ ಬಳಕೆಯಾದರೆ ಕಾನುಉನು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಬಹುದು.
ಪತ್ರಿಕೆಗಳಲ್ಲಿ ,ಆರ್ಕುಟ್ ಗಳಲ್ಲಿ ದಿನ ನಿತ್ಯ ಈ ಲವ್ಜಿಹಾದ್ ಬಗ್ಗೆ ವಿವರ ಗಳು ಪ್ರಕಟ ವಾಗುತ್ತಿರುವುದರಿಂದ ಜನತೆ ಎಚ್ಚೆತ್ತುಕೊಳ್ಳುತ್ತಿದ್ದಾರೆ .ಇಂತಹ ಮತಾಂತರಗಳಿಂದ ದೇಶಕ್ಕೆ ವಿಪತ್ತು ಉಂಟಾಗಬಹುದು ಎಂದು ಮನಗಂಡಿರುವ ಮಠ ಮಾನ್ಯಗಳು ಈ ವಿಷಯದಲ್ಲಿ ಜಾಗೃತರಾಗಿರುವುದು ಒಳ್ಳೆಯದೇ. ಮತಾಂತರ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ವಿಷಯ ಮಾತ್ರವಲ್ಲ ,ಇದರಿಂದಾಗಿ ಸಮಾಜ,aಕುಟುಂಬ ಹಾಗು ಸಾರ್ವಜನಿಕ ಶಾಂತಿ ನಾಶವಾಗುತ್ತದೆ,ಎಂದು ಈಗಾಗಲೇ ಹಲವಾರು ಮುಖಂಡರುಗಳು ಚಿಂತಿತರಾಗಿದ್ದಾರೆ . ಒಂದು ಅಚ್ಹರಿಯ ಸಂಗತಿಯೆಂದರೆ ಸೆಕ್ಯುಲರ್ವಾದಿಗಳು,ಹಾಗು ವಿಚಾವಾದಿಗಳೂ ಈ ಲವ್ಜಿಹಾದ್ ಬಗ್ಗೆ ಚಕಾರವೆತ್ತದೆ ಇರುವುದು .
ಹುಡುಗಿಯರೇ ಹುಷಾರ್ !ಅದು 'ಲವ್' ಅಲ್ಲ ,ಜಿಹಾದ್!! ಎಂದು ಪ್ರತಾಪಸಿಂಹ - ಬೆತ್ತಲೆ ಜಗತ್ತು ಅಂಕಣದಲ್ಲಿ [ವಿಜಯ ಕರ್ನಾಟಕ /ಶನಿವಾರ ,೧೭ ಅಕ್ತೊಬ್ಬರ್ ೨೦೦೯/ಬೆಂಗಳೂರು ] ಎಂದು ಬರೆದು ಹುಡುಗಿಯರನ್ನು ಎಚ್ಚರಿಸಿದ್ದಾರೆ.
"ಲವ್ ಜಿಹಾದ್ ಒಂದು ವ್ಯವಸ್ತಿತ ಹಾಗು ವಿಸ್ತೃತ ಜಾಲವಾಗಿದ್ದು ಅನ್ಯ ಧರ್ಮೀಯ ಹುಡುಗಿಯರನ್ನು ಪುಸಲಾಯಿಸಿ
ಪ್ರೇಮಿಸುವ ನಾಟಕವಾಡಿ,
ಅವರನ್ನು ಕೆಡಿಸಿ ಹೊರತಳ್ಳುವ ಉದ್ದೇಶವನ್ನು ಹೊಂದಿದೆ" ಎಂದು "ಲವ್ ಜಿಹಾದ್"ಬಗ್ಗೆ ನಡೆಯುತ್ತಿರುವ ತನಿಕೆಯವಹಿಸಿರುವ ಪೋಲಿಸ್ ಅಧಿಕಾರಿ ಅಂಡರ್ ಅಟ್ಯಾಕ್ ಭಾಂದವರು ಭಾರತಕ್ಕೆ ಹಲವು.
ಇಸ್ಟಾದರೂ halavu muslim bhaandavaru bhaaratakke halavu ರೀತಿಯ ಸೇವೆ ಸಲ್ಲಿಸಿದ್ದಾರೆ ,ಈಗಲೂ ಸಲ್ಲಿಸುತ್ತಿದ್ದಾರೆ .ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರವರ ಸೇವೆಯನ್ನು ಮರೆಯಲಾದೀತೆ? ಅಸಂಖ್ಯಾತ
ಮುಸ್ಲಿಂ ಪಂಗಡದ ಸೈನಿಕರು ನಮ್ಮ ಸೇನೆ ಯಲ್ಲಿದ್ದು ರಾಷ್ಟ್ರಪ್ರೇಮಿಗಳಾಗಿ ,ದೇಶಕ್ಕೋಸ್ಕರ ದುಡಿಯುತ್ತಿರುವುದು ಸುಳ್ಳೇ? ಈ ತರಹ ಮುಸ್ಲಿಂ ಪಂಗಡ ದವರು ನಿಜಕ್ಕೂ ಧನ್ಯರು!
ನಮ್ಮ ಅಭಿಮಾನ ರಹಿತ ಸ್ವಧರ್ಮೀಯರು ಹಾಗು ರಾಜಕಾರಣಿಗಳೂ ಯೋಚಿಸುವ ಕಾಲ ಬಂದಿದೆ.

ಈ ದಿನದ ಸ್ಪಂದನ:
"ದೇಶದ ಏಕತೆ ಹಾಗು ಭಾವೈಕ್ಯತೆಗಳನ್ನೂ ಸಾರಲು ,ವ್ಯಕ್ತಿಯಲ್ಲಿ ಭ್ರಾತೃತ್ವ ಹಾಗು ಸ್ವಾಭಿಮಾನವನ್ನು ಬಿತ್ತುವುದು
ಸಂವಿಧಾನದ ಉದ್ದೇಶ"
ಡಾ.ಬಿ.ಆರ್.ಅಂಬೇಡ್ಕರ್


ಹೀಗೊಂದು ಪ್ರಶ್ನೆ:
ಬೇಲಿಯೇ ಎದ್ದು ಹೊಲ ಮೆಯ್ದರೆ ,
ಭೂಮಿಯೇ ಬಂಜೆಯಾದರೆ ,
ಬೇವಿನ ಮರಕ್ಕೇ ರೋಗ ಬಂದರೆ ,
ಸೂರ್ಯನೆ ಶಾಖರಹಿತನಾದರೆ ,
ಕೇಳುವುದು ಯಾರನ್ನು?

ಮನೆಯ ಯಜಮಾನನೇ ತುಡುಗು ಮಾಡಿದರೆ ,
ತಾಯಿಯೇ ಮಗನಿಗೆ ವಿಷ ಉಣಿಸಿದರೆ ,
ಜ್ಞಾನ ನೀಡುವ ಗುರುವೇ ಅಜ್ನಾನಿಯಾದರೆ ,
ಮಠದ ಗುರುವೇ ಅಧರ್ಮಿಯಾದರೆ ,
ಕೇಳುವುದು ಯಾರನ್ನು?

ಕಂದಾಯ ಮಂತ್ರಿಯೇ ಸುಸ್ತಿದಾರನಾದರೆ,
ವನ ಸಂರಕ್ಷಣ ಅಧಿಕಾರಿಯೇ ಮರ ಕಡಿಸಿದರೆ ,
ಸಂಚಾರಿ ನಿರಿಕ್ಷಕರೆ ರಸ್ತೆ ನಿಯಮ ಪಾಲಿಸದಿದ್ದರೆ,
ರಕ್ಷಣಾ ಮಂತ್ರಿಯೇ ಮೀರಸಾದಕ ನಾದರೆ,
ಕೇಳುವುದು ಯಾರನ್ನು?

ನ್ಯಾಯಾಲಯವೇ ತಪ್ಪು ತೀರ್ಪು ನೀಡಿದರೆ ,
ಲೋಕಾಯುಕ್ತರೆ ಲಂಚ ಕೇಳುವುದಾದರೆ ,
ವೈದ್ಯರೇ ರೋಗಿಯ ಮರಣಕ್ಕೆ ಕಾರಣರಾದರೆ,
ದೇಶದ ಅಧ್ಯಕ್ಷರೇ ನಿಷ್ಕ್ರೀಯರಾದರೆ ,
ಕೇಳುವುದು ಯಾರನ್ನು? ಕೇಳುವುದು ಯಾರನ್ನು?

ಬೇಲೂರು ದ .ಶಂ .ಪ್ರಕಾಶ .
ವಂದನೆಗಳು .ನಿಮ್ಮ ಅಭಿಪ್ರಾಯ ತಿಳಿಸಿ.
----------------------------------------- ಓಂ ------------------------------------------------




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ