ಸೋಮವಾರ, ಅಕ್ಟೋಬರ್ 26, 2009

೧೨] 'ಮತಾಂತರ'-ಲವ್ ಜಿಹಾದ್ ಎಂಬ ಹೊಸ ಅಸ್ತ್ರ . ಭಾಗ-೨.

ಶ್ರೀ ವಿರೋಧಿನಾಮ ಸಂವತ್ಸರ ದಕ್ಷಿಣಾಯಣ ಶರದೃತು ಕಾರ್ತಿಕ ಮಾಸ ಶುಕ್ಲ ಪಕ್ಷ , ಮಂಗಳವಾರ -೨೭.೧೦.೨೦೦೯.

೨೫-೧೦-೨೦೦೯ ರ ನನ್ನ ಬ್ಲಾಗ್ ನಲ್ಲಿ 'ಮತಾಂತರ -ಲವ್ ಜಿಹಾದ್ 'ಎಂಬ ಹೊಸ ಅಸ್ತ್ರ ದ ಬಗ್ಗೆ ಬರೆಯಲು ಹೊರಟು,ಕೇವಲ ಪೀಟಿಕೆ ಯನ್ನಷ್ಟೇ ಬರೆದಿದ್ದೆ.ಪೀಟಿಕೆಯೇ ಅತಿಯಾಯಿತೇನೋ ಅಷ್ಟಕ್ಕೆ ನಿಲ್ಲಿಸಿದ್ದೆ.
ಮತ್ತೆ ಅದೇ ಬರೆಯಬೇಕಾಗಿದೆ. ಈ ಮತಾಂತರ ಎಂಬ ಪಿಡುಗಿನಿಂದ ನಮ್ಮ ರಾಷ್ಟ್ರ ಅನೇಕ ಸಾಮಾಜಿಕ ಹಾಗು ರಾಷ್ಟ್ರೀಯ ಸಮಸ್ಯೆ ಗಳನ್ನೂ ಎದುರಿಸ ಬೇಕಾಗಿದೆ .ಅಲ್ಪ ಸಂಖ್ಯಾತ ರಲ್ಲಿ ಮುಖ್ಯವಾದ ಎರಡು ಪಂಗಡಗಳು ನಮ್ಮ ದೇಶದಲ್ಲಿ ಸ್ವಾತಂತ್ಯ್ರ ಪೂರ್ವದಿಂದಲೂ ಈ ಮತಾಂತರ ಸಮಸ್ಯೆಯನ್ನು ಹುಟ್ಟಿ ಹಾಕಿವೆ. ಕ್ರಿಶ್ಚಿಯನ್ ಹಾಗು ಮುಸ್ಲಿಂ ಆ ಎರಡು ಕಮ್ಯುನಿಟಿ ಗಳೆಂದು ಬೇರೆ ಹೇಳಬೇಕಾಗಿಲ್ಲ ತಾನೆ?
"ಹುಲುಸು ಮೇವು ಇರುವಕದೆ ತಾನೆ ,ಎಲ್ಲಿ ಬೇಲಿ ಯಿಲ್ಲವೋ ಅಲ್ಲಿ ತಾನೆ ಪುಂಡು ದನಗಳು ನುಗ್ಗಿ ಮೇಯುವುದು ,ಮೇಯ್ದು ಕೊಬ್ಬುವುದು.ಮೇವು ತಿನ್ನುವುದಲ್ಲದೆ ಅಲ್ಲಿಯ ಪರಿಸರವನ್ನು ಹಾಳುಮಾಡುವುದು ತಾನೆ ಅವುಗಳ ಕೆಲಸ? ಹಾಗೆ ಆಗಿದೆ ನಮ್ಮ ಪರಿಸ್ತಿತಿ ! ಹಿಂದೂ ಸಮಾಜಕ್ಕೆ ಭದ್ರ ಬೇಲಿ ಇಲ್ಲದಿರುವುದರಿಂದ ಮತಾಂತರ ಎಂಬುದು ನಿತ್ಯ ನಡೆಯುವ ಘಟನೆ ಯಾಗಿದೆ. ಈ ಮತಾಂತರವನ್ನು ತಡೆಯುವ ಕೆಲಸವನ್ನು ನಮ್ಮ ಸಮಾಜ ಅಥವಾ ಸರ್ಕಾರ ಮಾಡಬೇಕು .ನಮ್ಮ ಸರ್ಕಾರ ನಿದ್ದೆ ಮಾಡುತ್ತಿದೆ,ಅಥವಾ ಹಾಗೆ ನಟಿಸುತ್ತಿದೆ .
ಜಾಣ ಕಿವುಡು, ಕುರುಡು ಪ್ರದರ್ಶಿಸುತ್ತಿದೆ .ನಮ್ಮ ಜನರಾದರೋ ಅಸಹಾಯಕರಾಗಿದ್ದಾರೆ. ತಮ್ಮ ಮನೆಯಲ್ಲಿ ಯಾರಾದರೂ ಅನ್ಯ ಧರ್ಮಕ್ಕೆ ಮತಾಂತರವಾದರೆ ಅದನ್ನು ಪ್ರತಿಭಟಿಸಿದರೂ ಅವರಿಗೆ ಬೆಂಬಲ ದೊರೆಯದೆ ಮೂಕ ಸಂಕಟ ಅನುಭವಿಸುತ್ತಿದ್ದಾರೆ.
ಹಾಗಾದರೆ ಈ ಲವ್ ಜಿಹಾದ್ ಎಂದರೇನು?'
"ಪ್ರೀತಿ -ಪ್ರೇಮದ ಹೆಸರಿನಲ್ಲಿ ಧಾರ್ಮಿಕ ತೀವ್ರವಾದಿಗಳು ತಮ್ಮ ಜನಾಂಗದ ಯುವ ಜನಾಂಗವನ್ನು ಪ್ರೇರೇಪಿಸಿ ,ಅನ್ಯ ಧರ್ಮೀಯ ಹುಡುಗಿಯರನ್ನು ಪುಸಲಾಯಿಸಿ ಬುಟ್ಟಿಗೆ ಹಾಕಿಕೊಳ್ಳುವಂತೆ ಹೇಳಿ ,ಅವರನ್ನು ಅವರನ್ನು ಮದುವೆಯಾಗುವುದಾಗಿ ನಂಬಿಸಿ ,ಸ್ವಲ್ಪ ದಿನ ಮದ್ರಾಸದಲ್ಲಿರಿಸಿ ಮಾನಸಿಕವಾಗಿ ಅವರನ್ನು ಮತಾಂತರಕ್ಕೆ ಅಣಿಗೊಳಿಸಲಾಗುತ್ತದೆ. ಪ್ರೀತಿ -ಪ್ರೇಮ -ವಿವಾಹದ ನೆಪದಲ್ಲಿ ಇಸ್ಲಾಂ ಗೆ
ಮತಾಂತರ ಮಾಡುತ್ತಾರೆ "
ಈ ಲವ್ ಜಿಹಾದಿಗಳು ಹೆಚ್ಚಾಗಿ ಕಾಲೇಜ್ ಕ್ಯಾಂಪಸ್ ಗಳಲ್ಲೇ ತಮ್ಮ ಬೇಟೆ ಆರಂಬಿಸುತ್ತಾರೆ. ಅಲ್ಲಿರುವ ಮುಸ್ಲಿಂ ವಿದ್ಯಾರ್ಥಿನಿಯರ ಮೂಲಕ ಅವರ ಹಿಂದೂ-ಕ್ರೈಸ್ತ ಸ್ನೇಹಿತೆಯರ ಪರಿಚಯ ಮಾಡಿಕೊಂಡು ಅವರ ಮನವೊಲಿಸುವ ಪ್ರಯತ್ನ ಮಾಡುತ್ತಾರೆ.ಈ ಪ್ರಯತ್ನದಲ್ಲಿ ಚೆನ್ನಾಗಿ ಹಣ ಖರ್ಚು ಮಾಡಲೂ ಹಿಂದೆ-ಮುಂದೆ ನೋಡುವುದಿಲ್ಲ .ನಿಧಾನವಾಗಿ ಪ್ರೀತಿಯ ಗಾಳ ಹಾಕಿ ಅವರು ಬಲೆಗೆ ಬಿದ್ದ ಮೇಲೆ ಮುಗಿಯಿತು ನಂತರ ಮತಾಂತರ . ತದನಂತರ ಈ ಯುವತಿಯರಿಗೆ ಧರ್ಮಾಂದತೆಯನ್ನು ತಲೆಗೆ ತುಂಬಿ ನಮ್ಮ ಧರ್ಮ ದ ಮೇಲೆ ಗೂಬೆ ಕೂರಿಸಿ , ಧರ್ಮಯುದ್ದದ ಬಗ್ಗೆ ತಲೆ ಸವರಿ ,ನಮ್ಮ ದೇಶದ ಮೇಲೆ ಅವರನ್ನು ಎತ್ತಿಕಟ್ಟಿ ,ದೇಶವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಹುನ್ನಾರ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಲವ್ ಜಿಹಾದ್ ಯಾವುದೇ ವಿವಾದಕ್ಕೆ ಆಸ್ಪದ ನೀಡದೆ ,ತಣ್ಣಗೆ ತನ್ನ ಗುರಿಯತ್ತ ದಾಪುಗಾಲು ಹಾಕುತ್ತಿತ್ತು. ಕೇರಳ ಹಾಗು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಆಚರಣೆಯಲ್ಲಿ ತೊಡಗಿದ್ದಾಗಲೇ ,ಚಾಮರಾಜನಗರದ ಯುವತಿಯೊಬ್ಬಳು ಗೂಡವಾಗಿ ಕಣ್ಮರೆಯಾಗುವುದರೊಂದಿಗೆ ಈ
ಲವ್ ಜಿಹಾದ್ ಪ್ರಕರಣ ಅತಿ ಹೆಚ್ಹು ಸುದ್ದಿ ಯಾಗತೊಡಗಿತು .
ಈ ಚಾಮರಾಜನಗರದ ಲವ್ ಜಿಹಾದ್ ಪ್ರಕರಣದಿಂದಾಗಿ ,ಕೇರಳ ಹೈಕೋರ್ಟ್ ಅಲ್ಲಿನ ಸರ್ಕಾರಕ್ಕೆ ಲವ್ ಜಿಹಾದ್ ಬಗ್ಗೆ ಪೂರ್ಣ ವಿವರ ನೀಡುವಂತೆ ಆದೆಶಿಸಿರುವುದಲ್ಲದೆ , ಅದ್ರ ಉದ್ದೇಶ ,ಕಾರ್ಯ ಯೋಜನೆ ,ಈ ಕಾರ್ಯದಲ್ಲಿ ಯಾವ ಯಾವ ಸಂಘಟನೆಗಳು ಭಾಗಿಯಾಗಿವೆ?
ಇಂತಹ ಮತಾಂತರ ಚಟುವಟಿಕೆಗಳಿಗೆ ಎಲ್ಲಿಂದ ಹಣದ ಪೂರೈಕೆಯಾಗುತ್ತಿದೆ? ಕಳೆದ ಮೂರು ವರ್ಷಗಳಲ್ಲಿ ,ಶಾಲೆ ಕಾಲೇಜುಗಳ ಎಷ್ಟು
ವಿದ್ಯಾರ್ಥಿನಿಯರು ಹಾಗು vidhyaartiಗಳು ಈ ಮತಾಂತರ ಪಿಡುಗಿಗೆ ಬಲಿಯಾಗಿದ್ದಾರೆ, ಆರೋಪಿತ ಯೋಜನೆ ರಾಷ್ಟ್ರವ್ಯಾಪಿಯೇ? ಅದಕ್ಕೆ ವಿದೇಶಗಳಿಂದ ಹಣ ಹರಿದುಬರುತ್ತಿದೆಯೇ? ಬೇರೆ ಬೇರೆ ಭಯೋತ್ಪಾದಕ ಚಟುವಟಿಕೆ ಗಳಿಗೆ ಇದರೊಂದಿಗೆ ಏನಾದರೂ ಸಂಭಂದ ,ಸಂಪರ್ಕ ಇದೆಯೇ ಎಂಬ ಬಗ್ಗೆ ವರದಿ nidu vante ಸರ್ಕಾರಕ್ಕೆ ನಿರ್ದೇಶಿಸಿದೆ .
[ ಮುಂದುವರೆಯುವುದು]
ಈ ದಿನದ ಸ್ಪಂದನ :
"ಶಿಕ್ಷಣವೆಂದರೆ ಮಾಹಿತಿ ತುರುಕುವುದಲ್ಲ .ಶಿಕ್ಷಣದಿಂದ ವ್ಯಕ್ತಿತ್ವ ಅರಳಬೇಕು .ಪುರುಷ ಸಿಂಹರು ರೂಪುಗೊಳ್ಳಬೇಕು.
ದೇಶ ಭಕ್ತಿ ಮೈತಾಳಬೇಕು ."
- ಸ್ವಾಮಿ ವಿವೇಕಾನಂದ





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ